ಆನಂದ್ ಸಿನಿ ವೆಂಚರ್ಸ್ ಲಾಂಛನದಲ್ಲಿ ಆನಂದ್ ಅವರು ನಿರ್ಮಿಸುತ್ತಿರುವ ‘ಶಂಕ್ರ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಕೆ.ಪ್ರವೀಣ್ನಾಯಕ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಸುರೇಶ್ ಸಂಕಲನ, ಎ.ಹರ್ಷ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಲಲಿತಾಆನಂದ್.
ಶ್ರೀನಗರ ಕಿಟ್ಟಿ ನಾಯಕರಾಗಿ ಆಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಐಶ್ವರ್ಯ ದೇವನ್. ರಂಗಾಯಣ ರಘು, ಅವಿನಾಶ್, ಪ್ರವೀಣ್ನಾಯಕ್, ಮನದೀಪ್ರಾಯ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಕೋಟೆ ಪ್ರಭಾಕರ್, ತರಂಗ ವಿಶ್ವ, ಸಂದೀಪ್, ಮಂಜು, ಸುಷ್ಮಿತ.ಪಿ.ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.